ಹೃದಯಾಫಾತ ತಪ್ಪಿಸುವ ಔಷಧಿ

ಪ್ರತಿದಿನವೂ ಹೃದಯಾಘಾತದಿಂದ ಸಾವನ್ನಪ್ಪುವ ಜನಸಂಖ್ಯೆ ಹೆಚ್ಚಾಗುತ್ತಲಿದೆ. ಸ್ವಸ್ತವಾಗಿದ್ದಾಗಲೇ ಹೃದಯದ ಬಡಿತ ಒಮ್ಮಿಂದೊಮ್ಮೆಲೇ ನಿಂತು ನೆಲಕ್ಕೆ ಕುಸಿದು ಪ್ರಾಣ ಹಾರಿಹೋಗಿರುತ್ತದೆ. ಇಂತಹ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬೇಕೆಂದು ಡಾ|| ಹೆರಾಲ್ಡ್ ಲೇಜರ್ ಅವರು ಒಂದು ಪ್ರೊಟೀನನ್ನು ಜೈವಿಕ ತಂತ್ರಜ್ಞಾನದಿಂದ ಕಂಡು ಹಿಡಿದಿದ್ದಾರೆ.

ಜೈವಿಕ ತಂತ್ರಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟ ಮತ್ತು ಉನ್ನತ ಉಪಕಾರಿಯಾದಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಲಾಭಕಾರಿಯಾಗಿದೆ ಎಂದು ಬೇರೆ ಹೇಳಬೇಕಿಲ್ಲ. ಮ್ಯುಸಾಬೂಟ್ಸ್ ವಿಶ್ವವಿದ್ಯಾನಿಲಯದ ಡಾ|| ಲೇಜರ್ ಅವರು ಹೃದಯಾಘಾತವನ್ನು ತಡೆಗಟ್ಟಲು ಜೈವಿಕ ತಂತ್ರಜ್ಞಾನದಿಂದಲೇ ಸಾದರ ಪಡಿಸಿದ್ದಾರೆ. ಇದರ ಹೆಸರು “ಎಕ್ಸ್‌ಸಿರ್” (Soluble Human Complements Receptor) ಇದನ್ನು ಹಂದಿಗಳ ಮೇಲೆ ಪ್ರಯೋಗಿಸಿ ಸತ್ಯಾಂಶವನ್ನು ಕಂಡು ಹಿಡಿದಿದ್ದಾರೆ. ಈ ಔಷಧಿಯಿಂದಾಗಿ ಶರೀರದಲ್ಲಿರುವ ಅನೇಕ ರೋಗಾಣುಗಳ ವಿರುದ್ಧ ಪ್ರತಿರೋಧಕ ಶಕ್ತಿಯಾಗಿ ವರ್ಧಿಸಿದ್ಧನ್ನು ಕಂಡುಕೊಂಡು ಪ್ರಕಟಿಸಿದರು. ಹೃದಯಾಘಾತವನ್ನು ತಡೆಹಿಡಿಯುತ್ತದೆಂದು ಖಚಿತಪಡಿಸಿದರು.

ಇದಲ್ಲದೇ ಲಂಡನ್ನಿನಲ್ಲಿರುವ ಹೃದಯ ಶಾಸ್ತ್ರ ತಂಡದವರು ತಯಾರಿಸಿದ ಒಂದು ಕಂಪ್ಯೂಟರ್ ಸಾಫ್ಟ್‌ವೇರ್‌ನಿಂದ ಒಬ್ಬ ರೋಗಿ ಹೃದಯಾಘಾತಕ್ಕೆ ಈಡಾಗುವ ಸಾಧ್ಯತೆ ಇದೆಯೇ ಇಲ್ಲವೇ ಎಂಬುವುದನ್ನು ಮುಂಚಿತವಾಗಿಯೇ ತಿಳಿಯಬಹುದೆಂದು ಹೇಳುತ್ತಾರೆ. ಮತ್ತಲ್ಲದೇ ಹೃದಯದ ಗಾತ್ರ, ಹೃದಯ ಬಡಿತದ ಲಯ, ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ೧೦ ವರ್ಷಗಳಲ್ಲಿ ಮನುಷ್ಯನ ಸಾವಿನ ಗಂಡಾಂತರದ ಭವಿಷ್ಯವನ್ನು ಹೇಳುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಪ್ಪಲಿ
Next post ಪ್ರೇಮ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys